Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಸಾಧಕರು` ಚಿತ್ರದ ಹಾಡಿಗೆ ಶಿವಣ್ಣ ಮೆಚ್ಚುಗೆ
Posted date: 24 Mon, Dec 2012 ? 09:47:29 AM

 ಎಸ್.ಎಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಎಸ್.ಸುರೇಶ್ ಅವರು ನಿರ್ಮಿಸುತ್ತಿರುವ ‘ಸಾಧಕರು ಚಿತ್ರದಲ್ಲಿ ಡಾ:ರಾಜಕುಮಾರ್ ಅವರ ಕುರಿತಾಗಿ ಬರುವ ‘ಕನ್ನಡದ ರಾಜಣ್ಣ ಮುನ್ನಡೆಸಿ ನಮ್ಮನ್ನ ಮತ್ತೆ ಹುಟ್ಟಿ ಮುತ್ತಣ್ಣ ಹರಸಿ ಬನ್ನಿ ನಮ್ಮನ್ನ ಎಂಬ ಹಾಡನ್ನು ಆಲಿಸಿದ ಶಿವರಾಜಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ.
    ಸುಮಿತ್ರಜಯರಾಂ ಅವರು ಬರೆದಿರುವ ಈ ಹಾಡನ್ನು ‘ಕಡ್ಡಿಪುಡಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಎಚ್.ಎನ್.ಸೋಮನಾಥ ಶಿವರಾಜಕುಮಾರ್ ಅವರಿಗೆ ಕೇಳಿಸಿದ್ದಾರೆ. ಅಪ್ಪಾಜಿ ಅವರ ಬಗ್ಗೆ ಬರೆದಿರುವ ಈ ಹಾಡು ತುಂಬಾ ಚೆನ್ನಾಗಿದೆ ಎಂದು ತಿಳಿಸಿರುವ ಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
    ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಕಿರಣ್ ಭಟ್ ಸಂಗೀತ ನೀಡಿದ್ದಾರೆ.
    ಎಚ್.ಎನ್.ಸೋಮನಾಥ, ಎಚ್.ಎನ್.ಅಮರನಾಥ, ಜಿತೇಂದ್ರ, ಕೊಟ್ರೇಶ್, ಶೋಭಿನಾ, ಹೊನ್ನವಳ್ಳಿ ಕೃಷ್ಣ, ಅಕ್ಕಿಚೆನ್ನಬಸಪ್ಪ, ಜಂಗ್ಲಿ ಪ್ರಸನ್ನ, ಜಯರಾಂ, ಮಿಮಿಕ್ರಿ ರಾಜಗೋಪಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸಾಧಕರು` ಚಿತ್ರದ ಹಾಡಿಗೆ ಶಿವಣ್ಣ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.